ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕೇಶವ ಸಿ. ಸಾಲ್ಯಾನ್
Update: 2020-07-09 17:51 GMT
ಪಡುಬಿದ್ರಿ: ಪ್ರತಿಷ್ಟಿತ ಪಡುಬಿದ್ರಿ ರೋಟರಿ ಕ್ಲಬ್ನ ಅಧ್ಯಕ್ಷರಾಗಿ ಯುವನಾಯಕ ಕೇಶವ ಸಿ. ಸಾಲ್ಯಾನ್ ಹೆಜಮಾಡಿ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿಯಾಝ್, ಕೋಶಾಧಿಕಾರಿಯಾಗಿ ಗೀತಾ ಅರುಣ್ ಅವರು ಆಯ್ಕೆಯಾಗಿದ್ದಾರೆ.
ಶನಿವಾರ ಪದಗ್ರಹಣ: ಪದಗ್ರಹಣ ಸಮಾರಂಭ ಜುಲೈ 11ರಂದು ಶನಿವಾರ ಪಡುಬಿದ್ರಿಯ ಸಾಯಿ ಆರ್ಕೆಡ್ನಲ್ಲಿ ನಡೆಯಲಿದೆ. ಮಾಜಿ ಜಿಲ್ಲಾ ಚಯರ್ಮೆನ್ ಇಬ್ರಾಹಿಂ ಸಾಹೇಬ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ಸಹಾಯಕ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.