ಬೆಳ್ತಂಗಡಿ: ಜುಗಾರಿ ಅಡ್ಡೆಗೆ ದಾಳಿ; 26 ಮಂದಿಯ ಬಂಧನ

Update: 2020-07-11 18:07 GMT

ಬೆಳ್ತಂಗಡಿ, ಜು.11: ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್ಸೈ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡವು ಶುಕ್ರವಾರ ರಾತ್ರಿ ಪುದುವೆಟ್ಟು ಗ್ರಾಮದ ಮೀಯಾರು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಆಟದಲ್ಲಿ ನಿರತರಾಗಿದ್ದ 26 ಮಂದಿಯನ್ನು ಬಂಧಿಸಿದ ಪ್ರಕರಣ ವರದಿಯಾಗಿದೆ.

ಖಚಿತ ಮಾಹಿತಿ ಮೇರೆಗೆ ರಾತ್ರಿ ಸುಮಾರು 1 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ಮಿಯಾರ್ ಎಂಬಲ್ಲಿ ಗಣೇಶ ಎಂಬವರ ಮನೆಯ ಖಾಲಿ ಜಾಗದಲ್ಲಿ ಕ್ಯಾಂಡಲ್ ಬೆಳಕಿನಲ್ಲಿ ಶಾಲನ್ನು ನೆಲಕ್ಕೆ ಹಾಸಿ ಜುಗಾರಿ ಆಟ ಆಡುತ್ತಿರುವ ವೇಳೆ ಸ್ಥಳಕ್ಕೆ ದಾಳಿ ನಡೆಸಿದ ಸಮವಸ್ತ್ರದಲ್ಲಿ ಪೊಲೀಸರನ್ನು ಕಂಡ ಆರೋಪಿಗಳು ಪರಾರಿಯಾಗಳು ಯತ್ನಿಸಿದ್ದು, ಬೆನ್ನಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಟಗಾರರಿಂದ ಆಟಕ್ಕೆ ಉಪಯೋಗಿಸಿದ 26,185 ರೂ. ನಗದು, 8 ಮೋಟಾರ್ ಬೈಕ್ ಹಾಗೂ ರಿಕ್ಷಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News