ಬಜಾಲ್: ಎಸ್ಕೆಎಸ್ಸೆಮ್ನಿಂದ ತರಬೇತಿ ಶಿಬಿರ
Update: 2020-07-13 13:15 GMT
ಮಂಗಳೂರು, ಜು.13: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮತ್ತು ಸೋಶಿಯಲ್ ಸರ್ವಿಸ್ ವಿಂಗ್ ಬಜಾಲ್ ಘಟಕದ ವತಿಯಿಂದ ಕೊವೀಡ್-19 ನಿರ್ವಹಣೆ ಕುರಿತು ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರವು ಇತ್ತೀಚೆಗೆ ನಡೆಯಿತು.
ಶಾಸಕ ಯು.ಟಿ.ಖಾದರ್, ಡಾ.ಐ.ಬಿ.ಪಳ್ಲಾದೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಮ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಾಷ ಹಸನ್ ಕಂಕನಾಡಿ, ಸಂಘಟನಾ ಕಾರ್ಯದರ್ಶಿ ಬಿ.ಎಸ್.ಇಮ್ತಿಯಾಝ್ ಬಂದರ್, ಸೋಶಿಯಲ್ ಸರ್ವಿಸ್ ವಿಂಗ್ನ ಸಂಚಾಲಕ ಅಬ್ದುಲ್ಲತೀಫ್ ಕುದ್ರೋಳಿ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಮ್ ಬಜಾಲ್ ಘಟಕದ ಕಾರ್ಯದರ್ಶಿ ಬಿ. ರಹ್ಮತುಲ್ಲಾಹ್ ಕಾರ್ಯಕ್ರಮ ನಿರೂಪಿಸಿದರು.