ಬಜ್ಪೆಯ ವ್ಯಕ್ತಿ ನಾಪತ್ತೆ

Update: 2020-07-14 17:45 GMT

ಮಂಗಳೂರು, ಜು.14: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಡಗ ಎಕ್ಕಾರು ನೀರುಡೆ ನಿವಾಸಿ ರಘುವೀರ್ ಶೇಟ್ (57) ನಾಪತ್ತೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ನಾಪತ್ತೆಯಾದ ರಘುವೀರ್ ಹಲವು ದಿನಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಜು.3ರಂದು ಬಡಗ ಎಕ್ಕಾರು ಮನೆಯಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಕಿನ್ನಿಗೋಳಿಗೆ ತೆರಳಿದ್ದರು. ಅಲ್ಲಿ ತನ್ನ ಮಗನಲ್ಲಿ ಮನೆಯ ಕೀಲಿಯನ್ನು ಕೊಟ್ಟು ಮುಲ್ಕಿ ಕಡೆಗೆ ಹೋದವರು ವಾಪಸ್ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಹರೆ: ಐದು ಅಡಿ ಎತ್ತರ, ಕನ್ನಡ, ತುಳು, ಕೊಂಕಣಿ ಮಾತನಾಡುತ್ತಾರೆ. ಕಾಣೆಯಾಗುವ ದಿನ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು.

ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಜ್ಪೆ ಠಾಣೆ (0824- 2220531) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News