ಉಡುಪಿ: ನಾಯರ್‌ಕೆರೆ ಮಸೀದಿಯಲ್ಲಿ ಜುಮಾ ನಮಾಝ್ ತಾತ್ಕಾಲಿಕ ಸ್ಥಗಿತ

Update: 2020-07-15 09:57 GMT

ಉಡುಪಿ, ಜು.15: ಉಡುಪಿ ಜಿಲ್ಲಾಧಿಕಾರಿ ಘೋಷಿಸಿದ ಹೊಸ ಮಾರ್ಗಸೂಚಿಯ ಅನ್ವಯ ಬ್ರಹ್ಮಗಿರಿ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಅದರಂತೆ ಮುಂದಿನ ಸೂಚನೆಯವವರೆಗೂ ಹಾಶಿಮಿ ಮಸೀದಿಯಲ್ಲಿ ಶುಕ್ರವಾರದ ಜುಮಾ ಪ್ರಾರ್ಥನೆ ಇರುವುದಿಲ್ಲ. ಮಧ್ಯಾಹ್ನ, ಸಂಜೆ ಮತ್ತು ಮಗ್ರಿಬ್ ಪ್ರಾರ್ಥನೆಗಳು ಎಂದಿನಂತೆ ಮುಂದುವರಿಯುತ್ತವೆ. ರವಿವಾರ ಲಾಕ್‌ಡೌನ್ ಆಗಿರುವುದರಿಂದ ಮಸೀದಿ ಇಡೀ ದಿನ ಮುಚ್ಚಲ್ಪಡುತ್ತದೆ. ಮೂರು ಬಾರಿ ದೈನಂದಿನ ಪ್ರಾರ್ಥನೆಯ ಸಮಯದಲ್ಲಿ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಲಾಗುತ್ತದೆ ಎಂದು ಮಸೀದಿಯ ನಿರ್ವಹಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News