ರ್ಯಾಂಕ್ ವಿಜೇತೆಗೆ ಸಿಎಫ್ಐ ಅಭಿನಂದನೆ
Update: 2020-07-15 12:13 GMT
ಉಡುಪಿ, ಜು.15: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತೆ ಉಡುಪಿಯ ಅಭಿಜ್ಞ ರಾವ್ ಅವರನ್ನು ಮಂಗಳವಾರ ಅಭಿನಂದಿಸಲಾಯಿತು.
ಸಿಎಫ್ಐ ಜಿಲ್ಲಾ ಉಪಾದ್ಯಕ್ಷೆ ಜಂಜಂ ನೇತೃತ್ವದ ಉಡುಪಿ ಜಿಲ್ಲಾ ನಿಯೋಗ ತಂಡವು ರ್ಯಾಂಕ್ ವಿಜೇತೆಯ ಮನೆಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿಎಫ್ಐ ಗರ್ಲ್ಸ್ ಯುನಿಟ್ ಸದಸ್ಯರಾದ ಹೀಬಾ ಮತ್ತು ಆಯಿಷಾ ಹನೀನ್ ಉಪಸ್ಥಿತರಿದ್ದರು.