ಮುಂಬೈಯಿಂದ ರೈಲಿನಲ್ಲಿ ಬಂದರೆ ಕೇಸ್: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

Update: 2020-07-15 15:27 GMT

ಉಡುಪಿ, ಜು.15: ಜಿಲ್ಲೆಯಲ್ಲಿ 14 ದಿನಗಳ ಕಾಲ ಸೀಲ್‌ಡೌನ್ ಇರುವುದರಿಂದ ಮುಂಬೈಯಿಂದ ಯಾರು ಕೂಡ ರೈಲಿನಲ್ಲಿ ಬರಬಾರದು. ಸೇವಾ ಸಿಂಧುವಿನಲ್ಲಿ ನೋಂದಾವಣೆ ಮಾಡದೆ ಜಿಲ್ಲೆಗೆ ಆಗಮಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಈವರೆಗೆ 20 ಪ್ರಕರಣಗಳು ದಾಖಲಾಗಿವೆ. ಕುಂದಾಪುರದಲ್ಲಿ 163 ಬಾರಿ ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಇದು ತಾಂತ್ರಿಕ ದೋಷದಿಂದ ಆಗಿರಬಹುದೆಂದು ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News