ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯಾಗಿ ವೀರಪ್ಪನ್ ಪುತ್ರಿ

Update: 2020-07-16 11:38 GMT

ಚೆನ್ನೈ: ಕಾಡುಗಳ್ಳ ವೀರಪ್ಪನ್‍  ಪುತ್ರಿ ವಿದ್ಯಾ ರಾಣಿ, ದಿವಂಗತ ಸಿಎಂ ಎಂ ಜಿ ರಾಮಚಂದ್ರನ್ ಅವರ ದತ್ತು ಪುತ್ರಿ ಹಾಗೂ  ಕೆಲ ಚಿತ್ರರಂಗದ ಪ್ರಮುಖರನ್ನು ತಮಿಳುನಾಡು ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವಿವಿಧ ಘಟಕಗಳಿಗೆ ನೇಮಕ ಮಾಡಲಾಗಿದೆ

ವಿದ್ಯಾ ರಾಣಿ ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದು ಅವರನ್ನು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.  ಎಐಎಡಿಎಂಕೆ  ಸ್ಥಾಪಕ ಎಂಜಿಆರ್ ಅವರ ದತ್ತು ಪುತ್ರಿ ಗೀತಾ ಹಾಗೂ ಚಕ್ರಪಾಣಿ ಅವರ ಮೊಮ್ಮಗ ಆರ್ ಪ್ರವೀಣ್ ಮತ್ತು ನಟ ರಾಧಾ ರವಿ  ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ನಟ ವಿಜಯ್ ಕುಮಾರ್ ಹಾಗೂ ನಿರ್ದೇಶಕರುಗಳಾದ ಗಂಗೈ ಅಮರನ್ ಮತ್ತು ಕಸ್ತೂರಿ ರಾಜಾ ಅವರನ್ನು ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ವಿಶೇಷ ಸಂಘಟಕರನ್ನಾಗಿ ನೇಮಿಸಲಾಗಿದೆ. ಕಸ್ತೂರಿ ರಾಜಾ ಅವರು ನಟ ಧನುಷ್ ಅವರ ತಂದೆಯಾಗಿದ್ದಾರೆ.

ಸಂಗೀತ ನಿರ್ದೇಶಕ ಧಿನ ಹಾಗೂ ನಿರ್ದೇಶಕ ಪೆರರಸು ಅವರನ್ನು  ಕಲಾ ಮತ್ತು ಸಂಸ್ಕೃತಿ ಘಟಕದ ಕಾರ್ಯದರ್ಶಿಗಳನ್ನಾಗಿ ಹಾಗೂ ನಟ ಡಿ ಕೆ ಸುರೇಶ್ ಅವರನ್ನು ಒಬಿಸಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾರ್ಚ್ ತಿಂಗಳಲ್ಲಿ ನೇಮಕಗೊಂಡ ಎಲ್ ಮುರುಗನ್ ಅವರು ಪಕ್ಷ ಸಂಘಟನೆಯನ್ನು ಪುನರ್ರಚಿಸುವ ಭಾಗವಾಗಿ ಈ ನೇಮಕಾತಿಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News