ನಾನು ಯಾವುದೇ ತನಿಖೆಗೂ ಸಿದ್ಧ: ಕಾರ್ಕಳ ಶಾಸಕ ಸುನೀಲ್ ಕುಮಾರ್

Update: 2020-07-16 17:00 GMT

ಉಡುಪಿ, ಜು.16: ‘ನಾನು ಹಾಗೂ ನಮ್ಮ ಕುಟುಂಬ ನಿರ್ಮಾಣ ಮಾಡುತ್ತಿರುವ ಕಟ್ಟಡದ ಬಗ್ಗೆ ವಿರೋಧಿಗಳು ನಿರಾಧಾರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕುರಿತ ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಇದನ್ನು ಇಟ್ಟುಕೊಂಡು ಮಾಡುವ ಬ್ಲಾಕ್‌ಮೇಲ್‌ಗೆ ನಾವು ಬಗ್ಗುವುದಿಲ್ಲ. ಇದರ ವಿರುದ್ದ ಈ ವಾರ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ ಶಾಸಕರು, ಸರಕಾರದ ಕಾಮಗಾರಿಗೆ ಬೇರೆ ಸಿಮೆಂಟ್, ಖಾಸಗಿ ಕಾಮಗಾರಿ ಇನ್ನು ಬೇರೆ ಸಿಮೆಂಟ್ ಇದೆ ಎಂಬುದು ನನಗೆ ಈವರೆಗೆ ಗೊತ್ತಿಲ್ಲ. ಆ ಬಗ್ಗೆ ನನ್ನ ಮೇಲೆ ಆರೋಪ ಮಾಡಿರುವ ವಿರೋಧಿಗಳಿಗೆ ಸ್ಪಷ್ಟಪಡಿಸಬೇಕು. ನಮ್ಮ ಮೇಲೆ ಮಾಡುತ್ತಿರುವುದು ಆರೋಪ ಇದು ಮೊದಲ ಬಾರಿಯ ಅಲ್ಲ. ಈ ಹಿಂದೆ ಇಂತಹ ಹಲವು ಆಧಾರ ಇಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದರು.

ಈ ವಿಚಾರದಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ನನ್ನ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸ್ಪಷ್ಟಪಡಿಸುವ ಉದ್ದೇಶದಿಂದ ಈ ವಿಡಿಯೋ ಮಾಡಿದ್ದೇನೆ. ರಾಜಕೀಯವಾಗಿ ವಿರೋಧಿಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ. ಕಾರ್ಯಕರ್ತರು ಯಾರು ಕೂಡ ಇದನ್ನು ನಂಬುದುಬೇಡ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News