ಮುಂಡಗೋಡ: ಬೈಕ್ ಕಳ್ಳವು; ಆರೋಪಿಯ ಬಂಧನ

Update: 2020-07-19 11:53 GMT

ಮುಂಡಗೋಡ, ಜು.19: ಕಳೆದ ವರ್ಷ ಬೈಕ್ ಕಳ್ಳತನ ಮಾಡಿದ್ದವನನ್ನು ಪೊಲೀಸರು ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.

ಆರೋಪಿಯನ್ನು ಕಾತೂರ ಗ್ರಾಮದ ತೌಸೀಫ ತಹಶೀಲ್ದಾರ ಎಂದು ಹೇಳಲಾಗಿದೆ. ಶನಿವಾರ ಬೆಳಗಿನ ಜಾವ ಆರೋಪಿ ಚೀಲದಲ್ಲಿ ಬೈಕ್ ನ ಇಂಜಿನ್ ಹಾಕಿಕೊಂಡು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆತನನ್ನು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡದೇ ಇದ್ದಾಗ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ 17-8-2019 ರಂದು ಕಾತೂರ ಅರಣ್ಯದ ವಸತಿಗೃಹದ ಎದುರಿಗೆ ನಿಲ್ಲಿಸಿಟ್ಟ ಮಲ್ಲನಗೌಡ ಮ್ಯಾಗಿನಮನಿ ಎಂಬುವವರ ಬೈಕ್ ಕಳ್ಳತನ ಮಾಡಿದ ಬಗ್ಗೆ ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News