ಕೋಟ: ಲಾಕ್‌ಡೌನ್‌ನಿಂದ ವ್ಯವಹಾರ ಸ್ಥಗಿತ; ಯುವಕ ಆತ್ಮಹತ್ಯೆ

Update: 2020-07-19 15:24 GMT
ಸಾಂದರ್ಭಿಕ ಚಿತ್ರ

ಕೋಟ, ಜು.19: ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲಿನ ವ್ಯವಹಾರ ಸ್ಥಗಿತಗೊಂಡ ಬಗ್ಗೆ ಮಾನಸಿಕವಾಗಿ ನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.18ರಂದು ರಾತ್ರಿ ಗಿಳಿಯಾರು ಎಂಬಲ್ಲಿ ನಡೆದಿದೆ.

ಮೃತರನ್ನು ಗಿಳಿಯಾರು ರಾಜಶೇಖರ ದೇವಸ್ಥಾನದ ಬಳಿ ನಿವಾಸಿ ಪ್ರಭಾಕರ ಶೆಟ್ಟಿ ಎಂಬವರ ಮಗ ನಿತಿಶ್ ಶೆಟ್ಟಿ(31) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಸೇಲ್ಸ್ ವ್ಯವಹಾರ ಮಾಡಿ ಕೊಂಡಿದ್ದು, ಲಾಕ್‌ಡೌನ್ ನಿಂದ ವ್ಯವಹಾರ ನಿಂತುಹೋಗಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿಗೆ ಬಂದು ಯಾವುದೇ ಕೆಲಸ ಇಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದ ಇವರು,  ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News