ಲಾಕ್‌ಡೌನ್: ದ.ಕ. ಜಿಲ್ಲೆಯಲ್ಲಿ ಚುರುಕು ಪಡೆದ ಖರೀದಿ, ಜನ ಸಂಚಾರ

Update: 2020-07-20 06:25 GMT

ಮಂಗಳೂರು, 20: ರವಿವಾರ ಸಂಪೂರ್ಣ ಸ್ತಬ್ಧವಾಗಿದ್ದ ದ.ಕ. ಜಿಲ್ಲೆ ಇಂದು ಬೆಳಗ್ಗಿನ ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿ ಖರೀದಿ, ಜನ ಸಂಚಾರ ಚುರುಕು ಪಡೆದಿತ್ತು.

ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದಿನಸಿ, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ನಗರ ಹಾಗೂ ಹೆದ್ದಾರಿ ರಸ್ತೆಗಳಲ್ಲಿಯೂ ವಾಹನಗಳ ಸಂಚಾರ ಈ ಹಿಂದಿನ ಲಾಕ್‌ಡೌನ್ ವಿನಾಯಿತಿಯ ದಿನಗಳಿಗಿಂತ ಹೆಚ್ಚಾಗಿತ್ತು.

ನಗರದ ಕೆಲವು ಸೂಪರ್ ಮಾರುಕಟ್ಟೆ, ದಿನಸಿ ಅಂಗಡಿಗಳಲ್ಲಿ ಜನರ ಸರತಿ ಸಾಲು ಕಂಡು ಬಂದರೆ, ಪಡಿತರ ಅಂಗಡಿಗಳಲ್ಲಿಯೂ ಜನ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. 11 ಗಂಟೆಯವರೆಗೂ ನಗರದ ಒಳ ಭಾಗ ಸೇರಿದಂತೆ ಅಂಗಡಿ, ಮಾರುಕಟ್ಟೆಗಳಲ್ಲಿ ಜನರು ಖರೀದಿ ನಡೆಸಿದರೆ, ವಾಹನಗಳೂ ನಿರ್ಭೀತಿಯಿಂದ ಓಡಾಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News