ದ.ಕ. ಜಿಲ್ಲೆಯಲ್ಲಿ ಜು.23ಕ್ಕೆ ಲಾಕ್‌ಡೌನ್ ತೆರವು: ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

Update: 2020-07-21 17:19 GMT

ಮಂಗಳೂರು, ಜು.21: ದ.ಕ. ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ ಜು.22ರಂದು ಮುಂದುವರಿಯಲಿದ್ದು, ಜು.23ರಂದು ಬೆಳಗ್ಗೆ 5ಗಂಟೆಯಿಂದ ತೆರವುಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜು.16ರಿಂದ ಮತ್ತೆ ಜಾರಿಯಾಗಿದ್ದ ಲಾಕ್‌ಡೌನ್ ಜು.22ಕ್ಕೆ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಅತಿಹೆಚ್ಚು ಸೋಂಕು ದೃಢಪಟ್ಟಿರುವ ಕ್ಲಸ್ಟರ್‌ಗಳಲ್ಲಿ ತಾಲೂಕು ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರಿಂದ ಅಶಕ್ತ ಜನರ ಗುರುತು ಹಚ್ಚುವ ಸಮೀಕ್ಷೆಯನ್ನು (Intensive vulunerable people identification survey) ಜು.23ರಿಂದ ಆರಂಭಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News