ದ.ಕ. ಜಿಲ್ಲೆಯಲ್ಲಿ ಜು.23ಕ್ಕೆ ಲಾಕ್‌ಡೌನ್ ತೆರವು: ಸಚಿವ ಕೋಟ

Update: 2020-07-21 15:14 GMT

ಮಂಗಳೂರು, ಜು.21: ದ.ಕ. ಜಿಲ್ಲೆಯಲ್ಲಿ ಒಂದು ವಾರದಿಂದ ವಿಧಿಸಲಾಗಿದ್ದ ಲಾಕ್‌ಡೌನ್‌ನ್ನು ಜು.23ಕ್ಕೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಜು.22ರಂದು ರಾತ್ರಿವರೆಗೆ ಇರಲಿದೆ. ಜು.23ರಂದು ಬೆಳಗ್ಗೆ 5ಗಂಟೆಯಿಂದ ಲಾಕ್‌ಡೌನ್ ತೆರವುಗೊಳ್ಳಲಿದ್ದು, ಅಂದು ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ತೆರೆಯಲಿವೆ. ವಾಣಿಜ್ಯ ವ್ಯಾಪಾರವು ಮುಕ್ತವಾಗಿರಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News