ದ.ಕ. ​ಜಿಲ್ಲೆಯ 20 ಪಿಡಿಒಗಳ ವರ್ಗಾವಣೆ

Update: 2020-07-23 12:52 GMT

ಮಂಗಳೂರು, ಜು.23: ದ.ಕ. ಜಿಲ್ಲೆಯ 20 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಹಿತ ರಾಜ್ಯದ 114 ಮಂದಿ ಪಿಡಿಒಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಪಂ ಪಿಡಿಒ ಹರೀಶ್ ಬಂಟ್ವಾಳದ ಪುದು ಗ್ರಾಪಂಗೆ, ಸಂಗಬೆಟ್ಟು ಪಿಡಿಒ ಧರ್ಮರಾಜ್ ಕೊಯ್ಯೂರು ಗ್ರಾಪಂಗೆ, ಕರಿಯಂಗಳ ಪಿಡಿಒ ಪದ್ಮನಾಯಕ್ ಬಂದಾರು ಗ್ರಾಪಂಗೆ, ಅರಳ ಪಿಡಿಒ ಉತ್ತಮ ಚೆನ್ನಪ್ಪಬನಸೂರ್ ಕಣಿಯೂರು ಗ್ರಾಪಂಗೆ, ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಪಂ ಪಿಡಿಒ ಸುಧಾಕರ್ ವೇಣೂರು ಗ್ರಾಪಂಗೆ, ಚಾರ್ಮುಡಿ ಪಿಡಿಒ ಪ್ರಕಾಶ್ ಶೆಟ್ಟಿ ಪಿ ಎಚ್ ಉಜಿರೆ ಗ್ರಾಪಂಗೆ, ಕಣಿಯೂರು ಪಿಡಿಒ ಗೌರಿಶಂಕರ್ ಮಚ್ಚಿನ ಗ್ರಾಪಂಗೆ, ಕೊಯ್ಯೂರು ಪಿಡಿಒ ರಾಜೀವಿ ಬಳೆಂಜ ಗ್ರಾಪಂಗೆ ವರ್ಗಾವಣೆಗೊಂಡಿದ್ದಾರೆ.

ಬೆಳಾಲು ಪಿಡಿಒ ಶ್ರೀಧರ ಹೆಗ್ಡೆ ಕಡಿರುದ್ಯಾವರ ಗ್ರಾಪಂಗೆ, ವೇಣೂರು ಪಿಡಿಒ ವೆಂಕಟರಾಜ ಕೃಷ್ಣ ಲಾಯಿಲ ಗ್ರಾಪಂಗೆ, ಅಳದಂಗಡಿ ಪಿಡಿಒ ಇಮ್ತಿಯಾಝ್ ಕಲ್ಮಂಜ ಗ್ರಾಪಂಗೆ, ಶಿರಾಡಿ ಪಿಡಿಒ ವೆಂಕಟೇಶ್ ಪಿ. ಮಿತ್ತಬಾಗಿಲು ಗ್ರಾಪಂಗೆ, ಕಾಣಿಯೂರು ಪಿಡಿಒ ಯೋಗಿಣಿ ಶೆಟ್ಟಿ ನಾರಾವಿ ಗ್ರಾಪಂಗೆ, ಕೊಲ ಪಿಡಿಒ ನಾರಾವಿ ಗ್ರಾಪಂಗೆ, ನಮಿತಾ ಪುತ್ತೂರು ಗ್ರಾಪಂಗೆ, ಮಂಗಳೂರು ತಾಲೂಕಿನ ಸೂರಿಂಜೆ ಪಿಡಿಒ ರಾಜೇಂದ್ರ ಶೆಟ್ಟಿ ಅಳದಂಗಡಿ ಗ್ರಾಪಂಗೆ, ತೆಂಕಮಿಜಾರು ಪಿಡಿಒ ಭಾಗ್ಯಲಕ್ಷ್ಮಿ ಅಂಡಿಂಜೆ ಗ್ರಾಪಂಗೆ, ಬೆಳುವಾಯಿ ಪಿಡಿಒ ಭೀಮನಾಯ್ಕಾ ಬೆಳಾಲು ಗ್ರಾಪಂಗೆ, ಕುಟ್ಟುಪಾಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಕಳಿಯಾ ಗ್ರಾಪಂಗೆ, ಗೋಳಿತೊಟ್ಟು ಪಿಡಿಒ ನಯನಾ ಕುಮಾರಿ ಸಾಲೆತ್ತೂರು ಗ್ರಾಪಂಗೆ, ಎಡಮಂಗಲ ಪಿಡಿಒ ಸರಿತಾ ಜಾಲ್ ಡಿಸೋಜ ಬೆಳ್ಳಾರೆ ಗ್ರಾಪಂಗೆ ವರ್ಗಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News