ಪುತ್ತೂರು: ಸೀಲ್ಡೌನ್ ಆಗಿದ್ದ ಮನೆಗೆ ಎಸ್ಡಿಪಿಐ ಆಹಾರದ ಕಿಟ್ ವಿತರಣೆ
Update: 2020-07-25 15:41 GMT
ಪುತ್ತೂರು: ನಗರದ ಕರ್ಮಲ ಎಂಬಲ್ಲಿ ಕೊರೊನಾದಿಂದ ಸೀಲ್ಡೌನ್ ಆಗಿದ್ದ ಮನೆಯೊಂದಕ್ಕೆ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಕೆ. ಫಾತಿಮತ್ ಝೂರಾ,. ಸಿಲ್ಸಿಲಾ ವೆಲ್ಫೇರ್ ಎಸೋಸಿಯೇಷನ್ ಅಧ್ಯಕ್ಷ ಇಬ್ರಾಹಿಂ ಕೆ.ಎಂ. ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝರ್ ಬನ್ನೂರು, ಎಸ್ಡಿಪಿಐ ವಲಯ ಅಧ್ಯಕ್ಷ ಮೊಹಮ್ಮದ್ ಹುಸೇನ್, ಸದಸ್ಯ ಸುಲೈಮಾನ್, ಶರೀಫ್ ಕತ್ತಾರ್, ಸಾಬಿರ್ ಬನ್ನೂರು ಉಪಸ್ಥಿತರಿದ್ದರು.