ಸುಬ್ರಹ್ಮಣ್ಯ: ತಂದೆಗೆ ವಿಷವುಣಿಸಿ ಕೊಲೆಗೈಯಲು ಯತ್ನಿಸಿದ ಆರೋಪ; ಇಬ್ಬರು ಮಕ್ಕಳ ಬಂಧನ

Update: 2020-07-25 16:35 GMT

ಸುಬ್ರಹ್ಮಣ್ಯ, ಜು.25: ಹೆತ್ತ ತಂದೆೆಗೆ ವಿಷವುಣಿಸಿ ಕೊಲೆಗೈಯಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಇಬ್ಬರು ಮಕ್ಕಳನ್ನು ಪೋಲೀಸರು ಬಂಧಿಸಿರುವ ಪ್ರಕರಣ ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಅಂಜಿರಾ ಎಂಬಲ್ಲಿ ನಡೆದಿದೆ.

ಹೊನ್ನಪ್ಪ ನಾಯ್ಕ(50) ವಿಷ ಮಿಶ್ರಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ವ್ಯಕ್ತಿ. ಆಹಾರದಲ್ಲಿ ವಿಷ ಬೆರೆಸಿ ಕೊಲೆಗೈಯ್ಯಲು ಯತ್ನಿಸಿದ ಆರೋಪದಲ್ಲಿ ಅವರ ಇಬ್ಬರು ಮ್ಕಳಾದ ದೇವಿಪ್ರಸಾದ್ (33) ಮತ್ತು ಲೋಕೇಶ್ (35) ಎಂಬವರನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿದ್ದಾರೆ.

ಹೊನ್ನಪ್ಪನಾಯ್ಕರ ಪತ್ನಿ ಸವಿತಾ ನೀಡಿರುವ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ದೂರು ನೀಡಿದ ಮಹಿಳೆ ಹೊನ್ನಪ್ಪನಾಯ್ಕರ ಎರಡನೇ ಪತ್ನಿಯಾಗಿದ್ದು, ಬಂಧಿಸಲ್ಪಟ್ಟ ಇಬ್ಬರು ಮ್ಕಳು ಮೊದಲನೇ ಪತ್ನಿಯ ಮಕ್ಕಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಿಪ್ರಸಾದ್ ಮತ್ತು ಲೋಕೇಶ್‌ರಿಗೆ ಆಸ್ತಿ ವಿಚಾರವಾಗಿ ತಂದೆಯೊಂದಿಗೆ ತಕರಾರಿದ್ದು, ಪ್ರತಿ ದಿನ ಆಸ್ತಿಗಾಗಿ ತಂದೆಯೊಂದಿಗೆ ಜಗಳವಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೊನ್ನಪ್ಪ ನಾಯ್ಕರ ಪುತ್ರಿ ಜು.23 ರಂದು ನಾಲ್ಕೂರಿನ ಮನೆಗೆ ಬಂದಿದ್ದ ಹಿನ್ನಲೆಯಲ್ಲಿ ಹಂದಿ ಮಾಂಸ ತಂದು ಉಟದ ವ್ಯವಸ್ಥೆ ಮಾಲಾಗಿತ್ತು. ಇದೇ ಊಟವನ್ನು ಹೊನ್ನಪ್ಪ ನಾಯ್ಕರು ಜು.24ರ ಮುಂಜಾನೆ 6 ಗಂಟೆಯ ಸುಮಾರಿಗೆ ಸೇವಿಸಿದ್ದರೆನ್ನಲಾಗಿದೆ. ಊಟ ಮಾಡಿದ ತಕ್ಷಣವೇ ಹೊನ್ನಪ್ಪನಾಯ್ಕರು ವಾಂತಿ ಮಾಡಲಾರಂಭಿಸಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News