×
Ad

ಮಂಗಳೂರು: ಯುವಕರಿಂದ ಶ್ರಮದಾನದ ಮೂಲಕ ಝೀನತ್ ಬಕ್ಷ್ ಮಸೀದಿಯ ದಫನ ಭೂಮಿ ಸ್ವಚ್ಛತೆ

Update: 2020-07-26 12:38 IST

ಮಂಗಳೂರು, ಜು.26: ನಗರದ ಬಂದರ್ ಝೀನತ್ ಬಕ್ಷ್ ಜುಮಾ ಮಸೀದಿಯ ಆವರಣದ ದಫನ ಭೂಮಿಯನ್ನು ಯುವಕರ ತಂಡವೊಂದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ.

ಟೀಮ್ ಅಲ್-ಹಕ್ ಫೌಂಡೇಶನ್, ಕಸಾಯಿಗಲ್ಲಿಯ ಎಸ್‌ಎಂಎನ್‌ಎ ಗ್ರೂಪ್, ಅಶ್ರಫ್ (ಭಯ್ಯ) ಮತ್ತು ಝಾಕಿರ್ ಹುಸೈನ್(ಜಾಕಿ) ಹಾಗೂ ಝಾಕಿರ್ ಭಾಯ್ ಅವರನ್ನೊಳಗೊಂಡ ತಂಡಗಳ ಸುಮಾರು 50ಕ್ಕೂ ಅಧಿಕ ಯುವಕರು ಕಳೆದ ಐದು ದಿನಗಳಿಂದ ಶ್ರಮದಾನ ಮಾಡಿದೆ.

ಕೇಂದ್ರ ಜುಮಾ ಮಸೀದಿ ಆಡಳಿತ ಕಮಿಟಿಯ ಸಹಕಾರದಿಂದ ಅಲ್-ಹಕ್ ಫೌಂಡೇಶನ್‌ನ ಸದಸ್ಯ ಇರ್ಫಾನ್ ನೇತೃತ್ವದಲ್ಲಿ ಯುವಕರು ಸತತ ಐದು ದಿನಗಳಿಂದ ದಫನ ಭೂಮಿಯಲ್ಲಿ ಬೆಳೆದಿರುವ ಬೃಹತ್ ಮರಗಳು ಮತ್ತು ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಿದರಲ್ಲದೆ ನೆಲವನ್ನು ಸಮತಟ್ಟುಗೊಳಿಸಿದರು. ರಸ್ತೆ ಇಲ್ಲದ ಕಾರಣ ಈ ದಫನ ಭೂಮಿಯೊಳಗೆ ಯಾವುದೇ ವಾಹನ, ಜೆಸಿಬಿ ಪ್ರವೇಶಿಸಲು ಸಾಧ್ಯವಿಲ್ಲವಾದರೂ ಕಡಿದ ಬೃಹತ್ ಮರಗಳನ್ನು ಹೊತ್ತು ಹೊರಗೆ ಸಾಗಿಸಿದರು.

ಈಗಾಗಲೆ ಕೊರೋನ ಸೋಂಕಿತ ಮೂವರ ಮೃತದೇಹಗಳನ್ನು ದಫನ ಕಾರ್ಯ ನೆರವೇರಿಸಿರುವ ಈ ತಂಡ ಇದೀಗ ಪೂರ್ವಭಾವಿಯಾಗಿ ದಫನ ಗುಂಡಿ ತೋಡುವ ಕಾರ್ಯವನ್ನು ಕೂಡ ಮಾಡುತ್ತಿವೆ. ಇದು ಹಳೆ ಕಾಲದ ದಫನ ಭೂಮಿಯಾಗಿದ್ದು, ಇಲ್ಲಿ ಬೃಹತ್ ಮರಗಳು ಮತ್ತು ಗಿಡಗಂಟಿಗಳು ಬೆಳೆದು ನಿಂತಿತ್ತು. ಇಲ್ಲಿನ ಉತ್ಸಾಹಿ ಯುವಕರು ಕಳೆದ ಐದು ದಿನದಿಂದ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್ಗಳಾದ ಸಂಶುದ್ದೀನ್ ಕುದ್ರೋಳಿ ಮತ್ತು ಲತೀಫ್ ಕಂದುಕ ಸಹಕರಿಸಿದ್ದಾರೆ ಎಂದು ಅಲ್ ಹಕ್ ಫೌಂಡೇಶನ್ ಅಧ್ಯಕ್ಷ ಇಮ್ತಿಯಾಝ್ ಬಿ.ಎಸ್. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News