ವಾಮಂಜೂರು: ಎನ್ಎಸ್ಯುಐನಿಂದ ಧರಣಿ
Update: 2020-07-28 10:03 GMT
ಮಂಗಳೂರು, ಜು.28: ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವಂತೆ ಹಾಗೂ ಕೆಸಿಇಟಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಎನ್ಎಸ್ಯುಐ ವತಿಯಿಂದ ನಗರದ ವಾಮಂಜೂರಿನ ಸೈಂಟ್ ಜೋಸೆಫ್ ಕಾಲೇಜಿನ ಎದುರು ಧರಣಿ ನಡೆಸಲಾಯಿತು.
ದ.ಕ. ಜಿಲ್ಲಾ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಬೆ, ಜಿಲ್ಲಾ ಉಪಾಧ್ಯಕ್ಷ ಅನ್ವಿತ್ ಕಟೀಲ್ ಮಾತನಾಡಿದರು.
ಈ ಸಂದರ್ಭ ಎನ್ಎಸ್ಯುಐ ಮಂಗಳೂರು ಉತ್ತರ ಬ್ಲಾಕ್ನ ಅಧ್ಯಕ್ಷ ಶೌನಕ್ ರೈ, ಮುಲ್ಕಿ-ಮೂಡುಬಿದಿರೆ ಬ್ಲಾಕ್ನ ಅಧ್ಯಕ್ಷ ಭರತ್ರಾಜ್ ಪೂಜಾರಿ, ಇಸ್ಮಾಯೀಲ್, ಶಶಾಂಕ್, ಪ್ರಶಾಂತ್, ಸುಶಾನ್, ಮೆಲ್ಡ್ರಿನ್ ಮತ್ತಿತ್ತರು ಪಾಲ್ಗೊಂಡಿದ್ದರು.