×
Ad

ಪೆರ್ಣಂಕಿಲದ ಆಶಾ ಕಾರ್ಯಕರ್ತೆಗೆ ಸನ್ಮಾನ

Update: 2020-07-28 18:35 IST

ಹಿರಿಯಡ್ಕ, ಜು.28: ಗರ್ಭಿಣಿ ಮಹಿಳೆಯೊಬ್ಬರನ್ನು ಮಧ್ಯರಾತ್ರಿ ವೇಳೆ ಹೆರಿಗೆಗಾಗಿ ಪೆರಣಂಕಿಲದಿಂದ ತಾನೇ ಸ್ವತಃ ರಿಕ್ಷಾ ಚಲಾಯಿಸಿಕೊಂಡು ಉಡುಪಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಆಶಾ ಕಾರ್ಯಕರ್ತೆ ರಾಜೀವಿ ಅವರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಪೆರ್ಣಂಕಿಲದಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಹಿರಿಯಡ್ಕ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಕಾಪು ತಾಪಂ ಸದಸ್ಯರಾದ ಸುಜಾತ ಶಂಕರ್ ಸುವರ್ಣ, ಲತಾ ಕಾಮತ್, ಗ್ರೇಸಿ ಕರ್ಡೋಜ, ಸರೋಜಿನಿ ಶೆಟ್ಟಿ, ಉಷಾ, ಮಾಜಿ ತಾಪಂ ಸದಸ್ಯರಾದ ಗುರುದಾಸ್ ಭಂಡಾರಿ, ಪ್ರಕಾಶ್ ಕಾಮತ್, ಬಾಬು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News