ಜು.29: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-07-28 13:17 GMT

ಮಂಗಳೂರು, ಜು.28: ನಗರ ವಿವಿಧ ಉಪಕೇಂದ್ರ ಹೊರಡುವ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ (ಜಂಗಲ್ ಕಟ್ಟಿಂಗ್, ಜಿಒಎಸ್ ನಿರ್ವಹಣೆ ಮತ್ತು ಇತರ ನಿರ್ವಹಣೆ) ಹಮ್ಮಿಕೊಂಡಿದ್ದು, ಜು.29ರಂದು ಬೆಳಗ್ಗೆಯಿಂದ ಸಂಜೆವೆರೆಗೆ ಮಂಗಳೂರಿನ ವಿವಿಧ ಭಾಗದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

* ಕೂಳೂರು/ಚಿಲಿಂಬಿ/ಕುಂಜತ್ತಬೈಲ್: ಜು.29ರಂದು ಬೆಳಗ್ಗೆ 10ರಿಂದ ಸಂಜೆ 4 ಘಂಟೆಯವರೆಗೆ 11 ಕೆವಿ ಕೂಳೂರು, ಚಿಲಿಂಬಿ, ಕುಂಜತ್ತಬೈಲ್ ಮತ್ತು ಮರಕಡ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ.
ಇದರಿಂದ ಮಂಗಳೂರಿನ ಗಾಂಧಿನಗರ, ಶಾಂತಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ, ಮೇಲುಕೊಪ್ಪಳ, ಜ್ಯೋತಿನಗರ, ಕುಂಜತ್ತಬೈಲ್, ಕೊರಂಟಾಡಿ, ಮರಕಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.

* ಕುದ್ರೋಳಿ: ಅಂದು ಬೆಳಗ್ಗೆ 10ರಿಂದ ಸಂಜೆ 5 ಘಂಟೆಯವರೆಗೆ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ದುರ್ಗಮಹಲ್ ಫೀಡರ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ದುರ್ಗಮಹಲ್, ಬರ್ಕೆ, ಕುದ್ರೋಳಿ, ಜುಮ್ಮಾ ಮಸೀದಿ, ಅಳಕೆ, ವಾದಿರಾಜನಗರ ಹತ್ತಿರ, ಸಿ.ಪಿ.ಸಿ ಕಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟನೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News