ಭೂಕುಸಿತ ಸಂತ್ರಸ್ತರಿಗೆ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಝೋನ್ ವತಿಯಿಂದ ಸಹಾಯಧನ ಹಸ್ತಾಂತರ
Update: 2020-07-29 11:27 GMT
ಮಂಗಳೂರು: ಗುರುಪುರ ಬಂಗ್ಲೆಗುಡ್ಡೆ ಭೂ ಕುಸಿತದಿಂದ ಮನೆ ನಷ್ಟ ಹೊಂದಿದವರಿಗೆ ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಸಮಿತಿಯು 50,000 ರೂ. ಸಹಾಯಧನವನ್ನು ಝೋನ್ ಅಧ್ಯಕ್ಷರಾದ ಮುನೀರ್ ಸಖಾಫಿ ಉಳ್ಳಾಲರವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ರಾಜ್ಯ ಉಪಾಧ್ಯಕ್ಷರಾದ ಸುಫಿಯಾನ್ ಸಖಾಫಿ ಉಸ್ತಾದ್ ಮಾತನಾಡಿ ದಾನಿಗಳು ಇನ್ನಷ್ಟು ಸಹಾಯವನ್ನು ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್, ವೆಸ್ಟ್ ಝೋನ್ ಪ್ರ.ಕಾರ್ಯದರ್ಶಿ ಹೈದರಾಲಿ ಕಾಟಿಪಳ್ಳ, ಝೋನ್ ಸದಸ್ಯರಾದ ಇಕ್ಬಾಲ್ ಮದ್ಯನಡ್ಕ,ಮನ್ಸೂರ್ ಅಮ್ಮುಂಜೆ, ಮೂಡಬಿದ್ರೆ ಡಿವಿಷನ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಬಜ್ಪೆ ಹಾಗೂ ಮೂಡಬಿದ್ರೆ ಡಿವಿಷನ್ ಕೋಶಾಧಿಕಾರಿ ನಜೀಬ್ ಕೈಕಂಬ ಉಪಸ್ಥಿತರಿದ್ದರು.