ಕಾರ್ಕಳ: ಪೆಟ್ರೋಲ್ ಬಂಕಿನ ಸೊತ್ತು ಕಳವು

Update: 2020-07-29 16:01 GMT

ಕಾರ್ಕಳ, ಜು.29: ಸಾಣೂರು ಸಿದ್ದಿವಿನಾಯಕ ಪುಯ್ಯೂಲ್ ಸರ್ವಿಸ್ ಪೆಟ್ರೋಲ್ ಬಂಕಿನ ಕಚೇರಿಗೆ ಜು.25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕಛೇರಿಯ ಬಾಗಿಲಿಗೆ ಹಾಕಿದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, 6,620ರೂ. ನಗದು, 7054ರೂ. ಹಾಗೂ 2,500ರೂ. ಮೌಲ್ಯದ ಎರಡು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News