ಶಂಕರನಾರಾಯಣ: ಮಹಡಿಯ ಮೆಟ್ಟಿಲಿನಿಂದ ಬಿದ್ದು ಮೃತ್ಯು

Update: 2020-07-29 16:17 GMT

ಶಂಕರನಾರಾಯಣ, ಜು.29: ಮಹಡಿಯ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.29ರಂದು ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಕಾರ್ಕಳ ಕೆದಿಂಜೆ ನಿವಾಸಿ ಮಾದೇಶ ಎಂದು ಗುರುತಿಸಲಾಗಿದೆ. ನಿತ್ಯಾನಂದ ಶೆಟ್ಟಿ ಎಂಬವರ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆ ಯಲ್ಲಿ ಕಲ್ಲಿನ ಡಿಸೈನಿಂಗ್ ಕೆಲಸ ಮಾಡಿಕೊಂಡಿದ್ದ ಇವರು, ಜು.27ರಂದು ರಾತ್ರಿ ಒಂದನೆ ಮಹಡಿಯಿಂದ ಮೂತ್ರ ವಿಸರ್ಜನೆಗೆಂದು ಮೆಟ್ಟಿಲಿಂದ ಇಳಿ ಯುತ್ತಿರುವಾಗ ಕಾಲು ಜಾರಿ ಆಯತಪ್ಪಿ 10 ಅಡಿ ಎತ್ತರದಿಂದ ಕೆಳಗೆ ಬಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇವರು, ಜು.28ರಂದು ನಸುಕಿನ ವೇಳೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News