ಹೋಂ ಕ್ವಾರೆಂಟೈನ್ನಲ್ಲಿರುವ ಕುಟುಂಬಗಳಿಗೆ ನೆರವು
Update: 2020-07-30 21:13 IST
ಮಂಗಳೂರು, ಜು.30: ನಗರದ ಕೊಡಿಯಾಲ್ ಬೈಲ್ 30ನೇ ವಾರ್ಡ್ನಲ್ಲಿ ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್ರ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ರ ಸಹಕಾರದೊಂದಿಗೆ ಹೋಂ ಕ್ವಾರೆಂಟೈನ್ನಲ್ಲಿರುವ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಈ ಸಂದರ್ಭ ವಾರ್ಡ್ ಅಧ್ಯಕ್ಷ ರಘುರಾಜ್ ಕದ್ರಿ, ನಾಮ ನಿರ್ದೇಶಿತ ಮಾಜಿ ಸದಸ್ಯ ಪ್ರೇಮ್ನಾಥ್ ಬಳ್ಳಾಲ್ ಭಾಗ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಶಾಂತಲಾ ಗಟ್ಟಿ, ಕಾಂಗ್ರೆಸ್ ಕೊರೋನ ಸಹಾಯವಾಣಿ ಸದಸ್ಯ ಪ್ರತಾಪ್ ಸಾಲ್ಯಾನ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.