ಎಸ್‌ಬಿಐನಿಂದ ವೆನ್ಲಾಕ್ ಆಸ್ಪತ್ರೆಗೆ ಮೂರು ವೆಂಟಿಲೇಟರ್ ಕೊಡುಗೆ

Update: 2020-07-30 16:04 GMT

ಮಂಗಳೂರು, ಜು.30: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಫೌಂಡೇಶನ್‌ನ ಕೋವಿಡ್-19ರ ಪರಿಹಾರ ಚಟುವಟಿಕೆ ಕಾರ್ಯಕ್ರಮದಡಿ ವೆನ್ಲಾಕ್ ಆಸ್ಪತ್ರೆಗೆ ಏಳು ಲಕ್ಷ ರೂ. ಮೌಲ್ಯದ ಮೂರು ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ಗುರುವಾರ ನೀಡಲಾಯಿತು.

ಎಸ್‌ಬಿಐ ಮಂಗಳೂರು ವಲಯದ ಉಪ ಪ್ರಧಾನ ವ್ಯವಸ್ಥಾಪಕ ರಾಜೇಶ್ ಗುಪ್ತಾ ಅವರು ವೆಂಟಿಲೇಟರ್‌ಗಳನ್ನು ನೂತನ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಎಸ್‌ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಹರಿಶಂಕರ್, ಮುಖ್ಯ ವ್ಯವಸ್ಥಾಪಕ ದಿನೇಶ್ ಯು. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News