ಖಾಝಿ ಬೇಕಲ್ ಉಸ್ತಾದ್ ಅವರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

Update: 2020-07-31 16:38 GMT

ಕೊಣಾಜೆ: ದ.ಕ.ಜಿಲ್ಲಾ ಪ್ರವಾಸದಲ್ಲಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಇಂದು ಈದ್ ಹಬ್ಬದ ಪ್ರಯುಕ್ತ ಉಡುಪಿ, ಹಾಸನ ಹಾಗೂ ಚಿಕ್ಕಮಗಳೂರಿನ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ಅವರ ಮನೆಗೆ ಸೌಹಾರ್ದ ಭೇಟಿ ನೀಡಿ ಶುಭಾಶಯ ಸಲ್ಲಿಸಿದರು.

ಈ ಸಂದರ್ಭದಲ್ಲಿ ಖಾಝಿಯವರು ಶಾಲು ಹೊದಿಸಿ ಡಿಕೆಶಿ ಅವರನ್ನು ಸ್ವಾಗತಿಸಿ ಉತ್ತಮ ರಾಜಕೀಯ ಭವಿಷ್ಯ ನಿಮ್ಮದಾಗಲಿ ಎಂದು ಹಾರೈಸಿದರು. ಅಲ್ಲದೆ ಜಗತ್ತಿಗೆ ಮಾರಕವಾಗಿರುವ ಕೊರೋನ ಕಾಯಿಲೆ ಆದಷ್ಟು ಶೀಘ್ರ ಕಡಿಮೆಯಾಗಿ ಸೌಹಾರ್ದ, ಆರೋಗ್ಯಯುತ ಸಮಾಜ ಮತ್ತೆ ನಿರ್ಮಾಣವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಮಹಮ್ಮದ್, ಮುಖಂಡರಾದ ರಮಾನಾಥ ರೈ, ಯು.ಟಿ.ಖಾದರ್, ಹರೀಶ್ ಕುಮಾರ್, ಮಿಥುನ್ ರೈ, ಐವನ್ ಡಿಸೋಜ, ಚಂದ್ರಹಾಸ್ ಕರ್ಕೇರ, ಪ್ರಶಾಂತ್ ಕಾಜವ, ಮಮತಾ ಗಟ್ಟಿ, ಜಲೀಲ್ ಮೋಂಟುಗೋಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News