ಸಿಇಟಿ ಪರೀಕ್ಷೆ: ಮಂಗಳೂರಿನಲ್ಲಿ 101 ಮಂದಿ ಗೈರು
Update: 2020-08-01 08:02 GMT
ಮಂಗಳೂರು, ಆ.1: ಹೊರನಾಡು/ಗಡಿನಾಡು ಕನ್ನಡಿಗರಿಗೆ ಪ್ರಸಕ್ತ ಸಾಲಿನ ಕರ್ನಾಟಕ ಸಿಇಟಿ-2020 ಪರೀಕ್ಷೆ ಶನಿವಾರ ಬೆಳಗ್ಗೆ ನಗರದ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಇಂದಿನ ಪರೀಕ್ಷೆಗೆ 101 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. ಹೆಸರು ನೋಂದಾಯಿಸಿದ್ದ 362 ಮಂದಿಯ ಪೈಕಿ 261 ಮಂದಿ ಮಾತ್ರ ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.