ಕೊರೋನದಿಂದ ಚೇತರಿಕೆ : ಪುತ್ರಿಗೆಶ್ರೀ ಆಸ್ಪತ್ರೆಯಿಂದ ಬಿಡುಗಡೆ

Update: 2020-08-01 14:21 GMT

ಉಡುಪಿ, ಆ.1: ಕೊರೋನಕ್ಕೆ ಪಾಸಿಟಿವ್ ಬಂದು ಮಣಿಪಾಲ ಕೆಎಂಸಿಯಲ್ಲಿ ಕಳೆದ 12 ದಿನಗಳಿಂದ ಚಿಕಿತ್ಸೆಯಲ್ಲಿದ್ದ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಸಂಪೂರ್ಣವಾಗಿ ಚೇತರಿಸಿಕೊಂಡು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇದೀಗ ಪುತ್ತಿಗೆಶ್ರೀಗಳು ಉಡುಪಿಯ ಪಾಡಿಗಾರಿನಲ್ಲಿರುವ ಶಾಖಾ ಮಠದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಮಠದಲ್ಲಿ ಅವರು ದೈನಂದಿನ ಪೂಜಾ ವಿಧಿವಿಧಾನದಲ್ಲಿ ತೊಡಗಿಕೊಂಡಿದ್ದಾರೆ. ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಭಕ್ತರು ಸದ್ಯಕ್ಕೆ ಮಠದತ್ತ ಬರುವುದು ಬೇಡ. ಅನಾರೋಗ್ಯ ಕಾಲದಲ್ಲಿ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪುತ್ತಿಗೆ ಮಠದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News