ಗುರುಪುರ: ಪ್ಯಾಕೇಜಿಂಗ್ ಕಂಪನಿ ಶಟ್‌ಡೌನ್ ಗೆ ಶಾಸಕರ ಸೂಚನೆ

Update: 2020-08-01 14:41 GMT

ಮಂಗಳೂರು, ಆ.1: ಗುರುಪುರ ಹೋಬಳಿಯಲ್ಲಿರುವ ಖಾಸಗಿ ಪ್ಯಾಕೇಜಿಂಗ್ ಕಂಪನಿಯೊಂದರಲ್ಲಿ ಈಗಾಗಲೇ ಕೊರೋನ ಹಿನ್ನೆಲೆಯಲ್ಲಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದ್ದು, ಬಳಿಕ ಕಂಪನಿಯನ್ನು ಸರಕಾರದ ನಿರ್ದೇಶನಂದತೆ ಶಟ್‌ಡೌನ್ ಮತ್ತು ಸ್ಯಾನಿಟೈಸ್ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಶಾಸಕ ಡಾ.ಭರತ್ ಶೆಟ್ಟಿ ವೈ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಹಾಯಕ ಆಯುಕ್ತ ಮದನ್ ಮೋಹನ್, ತಹಶೀಲ್ದಾರ್ ಗುರುಪ್ರಸಾದ್, ಉಪತಹಶೀಲ್ದಾರ್ ಶಿವಪ್ರಸಾದ್ ಅವರೊಂದಿಗೆ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯರು, ಇತರ ರಾಜ್ಯಗಳ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. 39 ಮಂದಿಗೆ ಸೋಂಕು ಇದೀಗ ದೃಢ ಪಟ್ಟಿದೆ. ಕೊರೋನ ಪಾಸಿಟಿವ್ ಕಂಡು ಬಂದವರಿಗೆ ಸಮೀಪದ ಕೊಂಪದವುಬಳಿ ಕೋವಿಡ್ ಕೇರ್ ಕೇಂದ್ರವನ್ನು ಕಂಪನಿಯ ಸಹಕಾರದಲ್ಲಿ ಸ್ಥಾಪಿಸಲಾಗಿದೆ. ಅಲ್ಲಿ ಚಿಕಿತ್ಸೆ, ಐಸೋಲೇಷನ್‌ನಲ್ಲಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದವರಿಗೆ ಮನೆಯಲ್ಲಿ ಅವಕಾಶವಿದೆ ಎಂದು ಶಾಸಕರು ಹೇಳಿದರು.

ಕೊರೋನ ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇದೀಗ ಸೋಂಕು ಬಂದವರ ಜತೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಅವರನ್ನು ಐಸೋಲೇಷನ್‌ನಲ್ಲಿಡುವ ಕೆಲಸ ಮಾಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News