ಕಾರು ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2020-08-01 16:04 GMT

ಬ್ರಹ್ಮಾವರ, ಆ.1: ವೇಗವಾಗಿ ಸಾಗುತಿದ್ದ ಕಾರೊಂದು, ರಸ್ತೆ ದಾಟಲು ನಿಂತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಕೆ.ಜಿ.ರೋಡ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಪ್ರವೀಣ್ (24) ಎಂದು ಗುರುತಿಸಲಾಗಿದೆ. ಇವರು ಮಾವಿನಕುದ್ರು ಕಡೆ ತೆರಳಲು ಯು ಟರ್ನ್‌ನಲ್ಲಿ ನಿಂತಿದ್ದಾಗ, ಕೊಡವೂರಿನಿಂದ ಆರೂರಿನತ್ತ ತೆರಳುತಿದ್ದ ಆರೂರು ಮೇಲ್ಮನೆಯ ಯಾದವ್ ಸೇರಿಗಾರ್ ಚಲಾಯಿಸುತಿದ್ದ ಮಾರುತಿ ಸುಜುಕಿ ಬುಲೆನೋ ಕಾರು ಡಿಕ್ಕಿ ಹೊಡೆದಿತ್ತು. ಸೇರಿಗಾರ್ ಅವರು ಹೆಂಡತಿ, ಮಕ್ಕಳೊಂದಿಗೆ ಆರೂರಿಗೆ ತೆರಳುತಿದ್ದರು ಎನ್ನಲಾಗಿದೆ.

ಡಿಕ್ಕಿಯಿಂದ ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದ ಪ್ರವೀಣ್ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರೆಂದು ಹೇಳಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News