ಕೊರಗ ಕಾಲನಿಯಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಣೆ
Update: 2020-08-02 12:09 GMT
ಉಡುಪಿ, ಆ. 2: ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ವರಮಹಾಲಕ್ಷ್ಮೀ ಹಬ್ಬವನ್ನು ಶನಿವಾರ ಮಣಿಪಾಲದ ನೆಹರೂ ನಗರದ ಕೊರಗ ಕಾಲನಿಯ ಸುಮಂಗಲಿಯರಿಗೆ ಭಾಗಿನ ಕೊಟ್ಟು ಆಚರಿಸಲಾಯಿತು.
ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್.ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೋನಿಯವರಿಗೆ ವರಮಹಾಲಕ್ಷ್ಮೀ ಪೂಜೆಯ ಮಹತ್ವ ವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ವಿಎಚ್ಐಪಿ ಜಿಲ್ಲಾ ಮಾತೃ ಘಟಕದ ಅಧ್ಯಕ್ಷೆ ಪೂರ್ಣಿಮಾ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಗಳಾದ ರಶ್ಮಿತ ಶೆಟ್ಟಿ, ಪ್ರಮೀಳಾ ಹರೀಶ್, ಉಪಾಧ್ಯಕ್ಷೆ ಸೋನಾ ಪಾಯಿದೆ, ಕಾರ್ಯದರ್ಶಿ ನಿರಜ ಶೆಟ್ಟಿ, ಸ್ಥಳೀಯ ನಗರ ಸಭಾ ಸದಸ್ಯೆ ವಿಜಯಲಕ್ಷ್ಮೀ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್, ಕೋಶಾಧಿಕಾರಿ ರಜನಿ ಹೆಬ್ಬಾರ್, ತಾರಾ ಆಚಾರ್ಯ, ಸುಭೇದ, ಲೈಲಾ, ದಯಶಿನಿ, ಲಕ್ಷ್ಮೀ ಶೆಟ್ಟಿ, ಮಂಜುನಾಥ್ ಮಣಿಪಾಲ್,ಶಿವಕುಮಾರ್ ಉಪಸ್ಥಿತರಿದ್ದರು.