ಕೊರೋನ ಭೀತಿಯಿಂದ ಚಿಕಿತ್ಸೆ ನೀಡದ ವೈದ್ಯರು ಆರೋಪ : ಹೃದಯಘಾತದಿಂದ ವ್ಯಕ್ತಿ ಸಾವು
Update: 2020-08-03 17:40 GMT
ಭಟ್ಕಳ : ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಅವರು ಮೃತಪಟ್ಟರು ಎನ್ನಲಾದ ಆರೋಪಿತ ಘಟನೆ ಮುರುಡೇಶ್ವರದಲ್ಲಿ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಜಸ್ಥಾನ ಮೂಲದ ಮುರುಡೇಶ್ವರದ ಬೇಕರಿ ಉದ್ಯಮ ನಡೆಸುತ್ತಿರುವ ಉಕ್ಮಾರಾಮ್ ಬೊರಾನ (65) ಎಂದು ಗುರುತಿಸಲಾಗಿದ್ದು, ಮುರುಡೇಶ್ವರದ ಸರ್ಕಾರಿ ಹಾಗೂ ಅಲ್ಲಿನ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯ ಸಾವು ಸಂಭವಿಸಿದೆ ಎಂದು ಸ್ಥಳಿಯರು ಹಾಗೂ ಅವರ ಕುಟುಂಬದವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.