ಕಲಾವಿದ ಸದಾಶಿವ ಆಚಾರ್ಯ ನಿಧನ

Update: 2020-08-04 13:00 GMT

 ಉಡುಪಿ, ಆ.4: ಹವ್ಯಾಸಿ ನಾಟಕ ಕಲಾವಿದ, ಗಣಪತಿಮೂರ್ತಿ ರಚನೆಕಾರ ಶಿರಿಬೀಡು ಸದಾಶಿವ ಆಚಾರ್ಯ (65) ಅವರು ಹೃದಯಾಘಾತದಿಂದ ಆ.3ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ,ಇಬ್ಬರುಗಂಡು ಮಕ್ಕಳನ್ನು ಅಗಲಿದ್ದಾರೆ.

ಶಿರಿಬೀಡು ಸದಾಶಿವ ಆಚಾರ್ಯ ಅವರು ಗಣಪತಿ ಹಾಗೂ ನವರಾತ್ರಿಯ ದೇವಿಯ ಆವೆಮಣ್ಣಿನ ವಿಗ್ರಹವನ್ನು ರಚಿಸುವ ಕಲಾವಿದರಾಗಿದ್ದು, ಉಡುಪಿ ಸುತ್ತಮುತ್ತಲಿನ ಹಲವಾರು ಸಾರ್ವಜನಿಕ ಗಣೇಶೋತ್ಸವ ಹಾಗೂ ಶಾರದೋತ್ಸವಗಳಿಗೆ ಕಲಾತ್ಮಕ ಆವೆಮಣ್ಣಿನ ವಿಗ್ರಹಗಳನ್ನು ಕಳೆದ 45 ವಷರ್ ಗಳಿಂದಲೂ ಮಾಡಿ ಕೊಡುತ್ತಿದ್ದರು.

ಇತ್ತೀಚೆಗೆ ಅವರು ಮನೆಯಲ್ಲಿ ಪೂಜಿಸುವ ಭಕ್ತಾದಿಗಳಿಗೆ ಪರಿಸರಸ್ನೇಹಿ, ಬಣ್ಣ ರಹಿತ ಗಣಪತಿ ಮೂರ್ತಿಗಳನ್ನು ನಿರ್ಮಿಸಿಕೊಡುತಿದ್ದರು. ಹವ್ಯಾಸಿ ನಾಟಕ ಕಲಾವಿದರಾದ ಸದಾಶಿವ ಆಚಾರ್ಯರು ಬಯ್ಯ ಮಲ್ಲಿಗೆ,ಎಂಕ್ ಲಾ ಮದಿಮೆ ಆವೋಡು, ಗಂಗೆ ಗೌರಿ ಮುಂತಾದ ತುಳು ನಾಟಕಗಳಲ್ಲಿ ಸ್ತ್ರೀಪಾತ್ರ ಗಳಲ್ಲಿ ಮಿಂಚಿ ಜನಮನ್ನಣೆ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News