ಜೀಪ್ ಢಿಕ್ಕಿ: -ಬೈಕ್ ಹಿಂಬದಿ ಸವಾರ ಮೃತ್ಯು
Update: 2020-08-04 15:28 GMT
ಮಂಗಳೂರು, ಆ.4: ನಗರದ ಹೊರವಲಯದ ಕುಪ್ಪೆಪದವು ಸಮೀಪದ ಕಾಡಕ್ಕೇರಿ ಅಗರಿ ಕ್ರಾಸ್ನಲ್ಲಿ ಮಂಗಳವಾರ ನಡೆದ ಬೊಲೆರೋ-ಬೈಕ್ಗಳ ನಡುವಿನ ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ಕುಪ್ಪೆಪದವು ನಿವಾಸಿ ಸದಾಶಿವ ಸಫಲಿಗ (43) ಮೃತರು ಎಂದು ಗುರುತಿಸಲಾಗಿದೆ.
ಈತ ತನ್ನ ಸ್ನೇಹಿತನ ಬೈಕ್ನಲ್ಲಿ ಕುಪ್ಪೆಪದವಿನಿಂದ ಕಲ್ಲಾಡಿಯ ಮನೆಗೆ ಹಿಂದಿರುಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೊಲೆರೋ ಜೀಪ್ಗೆ ಢಿಕ್ಕಿಯಾಗಿದೆ. ಬೈಕ್ನ ಹಿಂಬದಿಯಲ್ಲಿದ್ದ ಸದಾಶಿವ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ ದಾರಿಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.