ನೀರಿನಲ್ಲಿ ಮುಳುಗಿ ಸಾವು

Update: 2020-08-04 16:15 GMT

ಬ್ರಹ್ಮಾವರ, ಆ.4: ಕೈಕಾಲು ತೊಳೆಯಲು ತೋಟದ ಪಕ್ಕದ ಸೀತಾನದಿಗೆ ಇಳಿದ ವೃದ್ಧೆಯೊಬ್ಬರು ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಚ್ಚೂರು ಗ್ರಾಮದಿಂದ ವರದಿಯಾಗಿದೆ.

ಮೃತರನ್ನು ನಡೂರು ಗ್ರಾಮದ ಸುಶೀಲ ಶೆಡ್ತಿ (71) ಎಂದು ಗುರುತಿಸಲಾಗಿದೆ.

ಅವರು ಸೋಮವಾರ ಬೆಳಗ್ಗೆ 8 ಗಂಟೆಗೆ ದನ ಕಟ್ಟಲು ಮನೆಯ ಬಳಿಯ ತೋಟಕ್ಕೆ ಹೋದವರು ಕೈಕಾಲು ತೊಳೆಯಲೆಂದು ಪಕ್ಕದ ಸೀತಾನದಿಗೆ ಇಳಿದಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗು ಮೃತಪಟ್ಟಿದ್ದರು. ಅವರ ಮೃತದೇಹ ಕಚ್ಚೂರು ಗ್ರಾಮದ ಹಾಲೇಕೊಡಿ ಗ್ರೆಟ್ಟಾ ಸುವಾರಿಸ್‌ರ ಜಾಗದ ಪಕ್ಕ ಹೊಳೆಯ ದಡದಲ್ಲಿ ಅಪರಾಹ್ನ ಪತ್ತೆಯಾಯಿತು.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News