ಮನ್ಹರ್ ಇಬ್ರಾಹಿಂ ನಿಧನ

Update: 2020-08-05 11:44 GMT

ಕಾಪು: ಕಾಪುವಿನ ಕೊಪ್ಪಲಂಗಡಿ ನಿವಾಸಿ ಮನ್ಹರ್ ಬಸ್ಸಿನ ಮಾಲಕ ಇಬ್ರಾಹಿಂ ಮನ್ಹರ್ ಕಾಪು (60) ಬುಧವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಕಾಂಗ್ರೆಸ್ ಮುಖಂಡ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಇವರು, ಮರ್ಕಝ್ ತಅಲೀಮಿಲ್ ಇಹ್ಸಾನ್ ಆಡಳಿತ ಸಮಿತಿ ಸದಸ್ಯರು, ಎಸ್‍ವೈಎಸ್ ಉಡುಪಿ ಜಿಲ್ಲಾ ಸದಸ್ಯರು ಎಸ್‍ವೈಎಸ್ ರಾಜ್ಯ ಸದಸ್ಯರು, ಮುಸ್ಲಿಮ್ ಜಮಾಅತ್ ಜಿಲ್ಲಾ ಸಮಿತಿ ಸದಸ್ಯರು, ಕಾಪು ಮಾರ್ಕೆಟ್‍ನಲ್ಲಿ ದಿನಸಿ ವ್ಯಾಪಾರಸ್ಥರಾಗಿದ್ದರು. ಮೂಳೂರು ಜಮಾಅತ್‍ನ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿ, ಎಪಿಎಂಸಿ ಮಾಜಿ ಸದಸ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕಾಂಗ್ರೆಸ್ ಪಕ್ಷದಲ್ಲಿ ಬ್ಲಾಕ್‍ನಲ್ಲಿ ವಿವಿಧ ಘಟಕಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಇದೀಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಮಾರುಕಟ್ಟೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷ, ಅಲ್‍ರಿಹಾ ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕ, ಕೊಪ್ಪಲಂಗಡಿ ನೂರುಲ್ ಹುದಾ ಮದ್ರಸದ ಆಡಳಿತ ಕಮಿಟಿ  ಮಾಜಿ ಅಧ್ಯಕ್ಷ ಸಹಿತ ಹಲವಾರು ಧಾರ್ಮಿಕ ಸಂಘಟನಗಳು ಹಾಗೂ ಸಾಮಾಜಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News