ಮಂಗಳೂರು: ವಸತಿ ಯೋಜನೆಗೆ ಅನುದಾನ ಬಿಡುಗಡೆ

Update: 2020-08-05 17:13 GMT

ಮಂಗಳೂರು, ಆ. 5: ತಾಲೂಕಿನ ಗ್ರಾಮ ಪಂಚಾಯತ್‌ಗಳ ವಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಪುನರ್ ವಸತಿ ಯೋಜನೆ ಪ್ರಗತಿಯಲ್ಲಿರುವ ಮನೆಗಳಿಗೆ ಐದು ಲಕ್ಷ ರೂ. ಘೋಷಣೆಯಾಗಿದ್ದು, ಈಗಾಗಲೇ ಒಂದು ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.

ಬಸವ ವಸತಿ ಯೋಜನೆಯಡಿ ಮನೆಗಳ ಗುರಿ ನಿಗದಿ ಪಡಿಸದೇ ಇರುವುದರಿಂದ ಪ್ರಸಕ್ತ ವರ್ಷಗಳ ಹೊಸ ಮನೆಗಳ ಗುರಿ ನಿಗದಿಪಡಿಸಿ ಫಲಾನು ಭವಿಗಳಿಗೆ ಯೋಜನೆ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದೇ ರೀತಿ ಪಿಂಚಣಿ ಯೋಜನೆಗಳಿಗೂ ನಿಗದಿತ ಅವಧಿಯಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News