ಮಂಗಳೂರು- ಕಾಸರಗೋಡು ನಡುವೆ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಪಾಸ್ ಗಳಿಗೆ ಮಾನ್ಯತೆ

Update: 2020-08-05 18:10 GMT

ಮಂಗಳೂರು, ಆ. 5: ಮಂಗಳೂರು- ಕಾಸರಗೋಡು ನಡುವೆ  ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗಿದ್ದ ಪಾಸುಗಳನ್ನು ಮತ್ತೆ ಬಳಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಕೆಲಸ ಮಾಡುವ ಮತ್ತು ಗಡಿನಾಡಿನ ಜನರಿಗೆ ಜಿಲ್ಲೆ ಪ್ರವೇಶಿಸಲು ಅಗತ್ಯವಿರುವ ಪಾಸ್‌ ಗಳನ್ನು ನೀಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಮಂಗಳೂರು ಹಾಗೂ ಕಾಸರಗೋಡು ನಡುವಿನ ತಲಪಾಡಿ ಗಡಿಯಲ್ಲಿ, ಈ ಹಿಂದೆ ಸುಮಾರು 1500 ಸಾರ್ವಜನಿಕರು ನಿತ್ಯ ಪ್ರಯಾಣದ ಪಾಸ್ ಹೊಂದಿದ್ದು, ಅವರೆಲ್ಲರ ಪಾಸ್ ಗಳಿಗೆ ಪುನರ್ ಮಾನ್ಯತೆ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಸಚಿವ ಕೋಟಾ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News