‘ಕೋವಿಡ್-19 ಸೃಷ್ಟಿಸಿದವನನ್ನು ಸ್ಮರಿಸೋಣ’ ಅಭಿಯಾನ

Update: 2020-08-06 12:00 GMT

ಮಲ್ಪೆ, ಆ.6: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ವತಿ ಯಿಂದ ಆ.5ರಿಂದ 20ವರೆಗೆ ಹಮ್ಮಿಕೊಳ್ಳಲಾಗಿರುವ ‘ಕೋವಿಡ್ -19: ಸೃಷ್ಟಿಸಿದವನನ್ನು ಸ್ಮರಿಸೋಣ’ ಎಂಬ ಅಭಿಯಾನದ ಅಂಗವಾಗಿ ಜಮಾಅತ್‌ನ ಸ್ಥಳೀಯ ಶಾಖೆಯು ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಆ ಪ್ರಯುಕ್ತ ಜನಜಾಗೃತಿಗಾಗಿ ಕರಪತ್ರಗಳು, ಮುಖಗವಚಗಳ ಉಚಿತ ವಿತರಣೆ, ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌ಬೋರ್ಡ್‌ಗಳು, ನಿರುದ್ಯೋಗಿಗಳಿಗೆ ಆರ್ಥಿಕ ಸಹಕಾರ, ಅಂತಿಮ ಸಂಸ್ಕಾರಗಳಲ್ಲಿ ಉಪಯೋಗಕ್ಕಾಗುವ ಪಿಪಿಇ ಕಿಟ್‌ಗಳು, ರೋಗಿಗಳಿಗೆ ಸಹಾಯ, ಸಾಮಾಜಿಕ ಜಾಲತಾಣದ ಮೂಲಕ ಜನಜಾಗೃತಿ, ದೂರದರ್ಶನ ಕಾರ್ಯಕ್ರಮ, ವೈಯಕ್ತಿಕ ಭೇಟಿ, ಮಾಹಿತಿ ಲಿಂಕ್‌ಗಳನ್ನು ಒದಗಿಸುವುದು, ವೈದ್ಯಕೀಯ ಮತ್ತು ಆರ್ಥಿಕ ಸಹಾಯ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಮಲ್ಪೆ ಸ್ಥಾನೀಯ ಅಧ್ಯಕ್ಷ ಉಸ್ತಾದ್ ರಫೀಕ್ ಹುಸೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News