ಪಿಪಿಸಿಯಲ್ಲಿ ಶುಕ್ರವಾರ ಉಪನ್ಯಾಸ

Update: 2020-08-06 15:26 GMT

ಉಡುಪಿ, ಆ.6: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಐಕ್ಯುಎಸಿ ಘಟಕ, ರಕ್ಷಕ-ಶಿಕ್ಷಕ ಸಂಘ ಹಾಗೂ ಕನ್ನಡ ವಿಭಾಗಗಳ ಆಶ್ರಯದಲ್ಲಿ ‘ರೋಗ ನಿರೋಧಕ ಶಕ್ತಿಯ ಹೆಚ್ಚಳದಲ್ಲಿ ಮನೆ ಮದ್ದುಗಳ ಪಾತ್ರ’ ಎಂಬ ವಿಷಯದ ಕುರಿತು ಸಾಹಿತಿ, ಲೇಖಕ ಮುನಿಯಾಲು ಗಣೇಶ್ ಶೆಣೈ ಅವರು ಆ.7 ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಾತನಾಡಲಿದ್ದಾರೆ.

ಈ ವಿಶೇಷ ಉಪನ್ಯಾಸ ಕಾಲೇಜಿನ ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಆಸಕ್ತ ಸಾರ್ವಜನಿಕರು ಈ - http://tiny.cc/ppclive2- ಸಂಪರ್ಕ ಕೊಂಡಿಯನ್ನು ಬಳಸಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News