ಉಡುಪಿ ಜಿಲ್ಲೆ : ಭಾರೀ ಮಳೆಯಿಂದ ಹಲವು ಮನೆಗಳಿಗೆ ಹಾನಿ ; ಲಕ್ಷಾಂತರ ರೂ. ನಷ್ಟ

Update: 2020-08-06 16:13 GMT

ಉಡುಪಿ, ಆ.6: ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಪುಟ್ಟಿ, ರಾಧ ಮೊಗೇರ್ತಿ, ದಿಲ್ಶಾದ್ ಎಂಬವರ ಮನೆಗಳಿಗೆ ಹಾನಿಯಾಗಿ ಒಟ್ಟು 70ಸಾವಿರ ರೂ. ಮತ್ತು ಮೊಳಹಳ್ಳಿ ಗ್ರಾಮದ ಉದಯ ಹಾಗೂ ಬೀಜಾಡಿ ಗ್ರಾಮದ ಶಾಂತ ಎಂಬವರ ಮನೆಗಳಿಗೆ ಒಟ್ಟು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ.

ಅಸೋಡು ಗ್ರಾಮದ ಗಂಗಮ್ಮ, ಕುಂಭಾಶಿ ಗ್ರಾಮದ ಸಿದ್ದು, ಹಕ್ಲಾಡಿ ಗ್ರಾಮದ ಗಿರಿಜ, ಕೊರ್ಗಿ ಗ್ರಾಮದ ಪುಷ್ಪಲತಾ, ಕೊಟೇಶ್ವರ ಗ್ರಾಮದ ಜಯಪ್ರಕಾಶ ಮನೆಗಳು ಭಾಗಶಃ ಹಾನಿಯಾಗಿ ತಲಾ 20,000ರೂ. ಮತ್ತು ಕಂದಾವರ ಗ್ರಾಮದ ರತ್ನಾಕರ ಶೆಟ್ಟಿ, ವಡೇರಹೋಬಳಿ ಗ್ರಾಮದ ಸೀತು, ಕುಂದಬಾರಂದಾಡಿ ಗ್ರಾಮದ ವರ್ಗೀಸ್ ಎಂಬವರ ಮನೆಗಳಿಗೆ ಹಾನಿಯಾಗಿ ತಲಾ 25,000ೂ. ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಗಿರಿಜಾ ಪೂಜಾರ್ತಿ ಎಂಬ ವರ ಮನೆಗೆ 1,30,000ರೂ., ಶಿರಿಯಾರ ಗ್ರಾಮದ ಬಸವ ಆಚಾರಿ ಎಂಬ ವರ ಮನೆಗೆ 20,000ರೂ., ಕಾಡೂರು ಗ್ರಾಮದ ಗೋವಿಂದ ನಾಯ್ಕ ಎಂಬವರ ಮನೆಗೆ 30,000ರೂ., ಹೊಸಾಳ ಗ್ರಾಮದ ಕೃಷ್ಣ ಬಂಗೇರ ಎಂಬವರ ಮನೆಗೆ 25,000ರೂ. ನಷ್ಟ ಉಂಟಾಗಿದೆ. ಅವರ್ಸೆ ಗ್ರಾಮದ ಬಾಲಕೃಷ್ಣ ಶೆಟ್ಟಿ ಎಂಬವರ ಮನೆ ಮತ್ತು 38 ಅಡಿಕೆ ಮರ ಗಳಿಗೆ ಹಾನಿಯಾಗಿ ಸುಮಾರು 35,000ರೂ. ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಶೋಭಾ ಎಂಬವರ ಮನೆಯ ಹೆಂಚು ಹಾರಿ ಹೋಗಿ ಸುಮಾರು 100,000ರೂ. ನಷ್ಟವಾಗಿದೆ.

ಕಾಪು ತಾಲೂಕಿನ ಪಲಿಮಾರು ಗ್ರಾಮದ ಅಬ್ದುಲ್ ಖಾದರ್ ಎಂಬವರ ಮನೆಯ ಗೋಡೆ ಕುಸಿದು ಸುಮಾರು 50ಸಾವಿರ ರೂ. ಮತ್ತು ಉಳಿಯಾರ ಗೋಳಿ ಗ್ರಾಮದ ಪ್ರೇಮ ಪೂಜಾರ್ತಿ ಎಂಬವರ ಮನೆಯ ಮೇಲೆ ಮರ ಬಿದ್ದು 20ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲ ಗಳು ತಿಳಿಸಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 50 ಮಿ.ಮೀ. ಮಳೆಯಾಗಿದೆ. ಉಡುಪಿ -37.66ಮಿ.ಮೀ., ಕುಂದಾಪುರ -38.0 ಮಿ.ಮೀ., ಕಾರ್ಕಳ -74.0ಮಿ.ಮೀ. ಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತೋಟಗಾರಿಕಾ ಬೆಳೆಗಳಿಗೆ ಹಾನಿ

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ರಾಮ ನಾಯ್ಕ ಎಂಬವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಸುಮಾರು 20000ರೂ., ಕುಳಂಜೆ ಗ್ರಾಮದ ಮಂಜಯ್ಯ ಶೆಟ್ಟಿ ಅವರ ತೋಟಗಾರಿಕಾ ಬೆಳೆ ಭಾಗಶಃ ಾನಿಯಾಗಿ10000ರೂ. ನಷ್ಟ ಉಂಟಾಗಿದೆ.

ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಸರೋಜ ಸಮಗಾರ್ತಿ ಎಂಬವರ ಬಾಳೆ ಕೃಷಿ ಹಾನಿಯಾಗಿ 10000ರೂ., ವಂಡಾರು ಗ್ರಾಮದ ಲಕ್ಷ್ಮೀ ಕುಲಾಲ್ತಿ ಎಂಬವರ 17 ಅಡಿಕೆ ಮರಗಳಿಗೆ ಹಾನಿಯಾಗಿ 15,000ರೂ. ನಷ್ಟ ವಾಗಿದೆ ಎಂದು ಮೂಲಗಳು ತಿಳಿಸಿವೆ.

ನೆರೆ ಇಳಿಮುಖ, ಕಡಲ್ಕೊರೆತ ತೀವ್ರ

ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಮಳೆ ಕಡಿಮೆಯಾಗಿರುವುದರಿಂದ ಆ.5 ರಂದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೆಲವು ಕಡೆ ಉಂಟಾಗಿದ್ದ ನೆರೆ ಇಳಿಮುಖವಾಗಿದೆ.

ನಾವುಂದ, ಬಡಾಕೆರೆ, ನಾಡ, ಹಡವು, ಪಡುಕೋಣೆ, ಅರೆಹೊಳೆ, ಸೇನಾ ಪುರಗಳಲ್ಲಿ ನೆರೆ ಇಳಿಕೆ ಕಂಡಿದ್ದು, ಇಡೀ ಪ್ರದೇಶ ಸಹಜ ಸ್ಥಿತಿಯತ್ತ ಮರಳಿದೆ. ಆದರೆ ಕೋಡಿ, ಮರವಂತೆ, ಪಡುಬಿದ್ರೆಗಳಲ್ಲಿ ಕಡಲಿನ ಅಬ್ಬರ ಮುಂದುವರೆ ದಿರುವುದು ಕಂಡುಬಂದಿದೆ.

ಬೆಳಗ್ಗೆಯಿಂದ ಸಂಜೆಯವರೆಗೆ ತೀರಾ ಕಡಿಮೆಯಾಗಿದ್ದ ಮಳೆಯು ಸಂಜೆ ವೇಳೆ ಮತ್ತೆ ಜೋರಾಗಿ ಸುರಿಯತೊಡಗಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿಯೂ ಸಂಜೆಯಿಂದ ರಾತ್ರಿವರೆಗೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News