ಸುರತ್ಕಲ್ ‘ಎನ್ಐಟಿಕೆ’: 61ನೆ ಸಂಸ್ಥಾಪನಾ ದಿನಾಚರಣೆ
Update: 2020-08-06 17:24 GMT
ಮಂಗಳೂರು, ಆ.6: ಸುರತ್ಕಲ್ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾದ್ಯಾವಿಲಯವು (ಎನ್ಐಟಿಕೆ) ತನ್ನ 61ನೆ ಸಂಸ್ಥಾಪಕರ ದಿನವನ್ನು ಗುರುವಾರ ಆಚರಿಸಿತು.
ಸಂಸ್ಥೆಯ ನಿರ್ದೇಶಕ ಪ್ರೊ. ಕರಣಂ ಉಮಾಮಹೇಶ್ವರ ರಾವ್ ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ಸಂಸ್ಥೆಯ ಸಂಸ್ಥಾಪಕ ಯು. ಶ್ರೀನಿವಾಸ ಮಲ್ಯ ಅವರ ದೃಷ್ಟಿಕೋನ ಹಾಗೂ ಧ್ಯೇಯದಂತೆ ಸಂಸ್ಥೆಯ ವಿದ್ಯಾರ್ಥಿಗಳನ್ನು ಜವಾಬ್ಧಾರಿಯುತ ಪ್ರಜೆಗಳಾಗಿ ಮತ್ತು ಸಮರ್ಥ ವೃತ್ತಿಪರರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದರಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿ ರುವ ಪರಿಸ್ಥಿತಿಗಳಿಂದ ಸಂಸ್ಥೆಯ ವಜ್ರ ಮಹೋತ್ಸವ ವರ್ಷದ ಸಮಾರೋಪ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.
ಈ ಸಂದರ್ಭ ನೀರಜಾ ರಾವ್, ಉಪ ನಿರ್ದೇಶಕ ಪ್ರೊ.ಅನಂತನಾರಾಯಣ ಎಸ್., ವಿವಿಧ ವಿಭಾಗಗಳ ಡೀನ್ಗಳು, ರಿಜಿಸ್ಟ್ರಾರ್, ಜಂಟಿ ರಿಜಿಸ್ಟ್ರಾರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.