ಮುಂಬೈ ‘ಕರ್ನಾಟಕ ಮಲ್ಲ’ ದೈನಿಕದ ಮಾಲಕ ಮುರಳೀಧರ ಶಿಂಗೋಟೆ ನಿಧನ

Update: 2020-08-06 17:52 GMT

ಮುಂಬೈ, ಆ.6: ಮುಂಬೈ ದೈನಿಕ ‘ಕರ್ನಾಟಕ ಮಲ್ಲ’ ಸಮೂಹ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ (83) ಬುಧವಾರ ಮಧ್ಯಾಹ್ನ ಪುಣೆ ಜಿಲ್ಲೆಯ ಜುನ್ನಾರ್ ಎಂಬಲ್ಲಿನ ನಿವಾಸದಲ್ಲಿ ನಿಧನರಾದರು.

ಆರಂಭದಲ್ಲಿ ಮುಂಬೈಯಲ್ಲಿ ಪತ್ರಿಕೆ ಮಾರಾಟ ಮಡುತ್ತಿದ್ದ ಇವರು ಬಳಿಕ ಐದಾರು ಪತ್ರಿಕೆಯ ಮಾಲಕರಾಗಿದ್ದರು. ಸುಮಾರು 39 ವರ್ಷಗಳ ಹಿಂದೆ ಮುಂಬೈಯಲ್ಲಿ ಕನ್ನಡ ದೈನಿಕ ಆರಂಭಿಸಿದ ಖ್ಯಾತಿ ಮಂಗಳೂರಿನ ‘ಮಂಗಳೂರು ಮಿತ್ರ’ದ ಮಾಲಕ ಎಂ ಮಲ್ಲಿಕಾರ್ಜುನಯ್ಯರಿಗಿದ್ದರೂ, ಕಳೆದ 25 ವರ್ಷದಿಂದ ‘ಕರ್ನಾಟಕ ಮಲ್ಲ’ ಪತ್ರಿಕೆ ಉಳಿಸಿ, ಬೆಳೆಸಿದ ಖ್ಯಾತಿ ಪುಣೆ ಮೂಲದ ಮುರಳೀಧರ ಶಿಂಗೋಟೆ ಹಾಗೂ ಅವರ ಪುತ್ರರಾದ ಅರವಿಂದ ಶಿಂಗೋಟೆ ಹಾಗೂ ಪ್ರವೀಣ್ ಶಿಂಗೋಟೆಯವರಿಗೆ ಸಲ್ಲುತ್ತದೆ.

ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲಿನ ಅಪಾರ ಪ್ರೀತಿಯೇ ಮುರಳೀಧರರು ಕನ್ನಡ ಪತ್ರಿಕೆಯೊಂದರ ಖರೀದಿಗೆ ಕಾರಣವಾಗಿದೆ. ಅವರು ಮುಂಬೈ ಹಲವು ಕನ್ನಡ ಸಂಘ-ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News