ಕರಾವಳಿಗೆ ಪ್ರಾಕೃತಿಕ ವಿಕೋಪ ಪುನರ್ವಸತಿ ಭವನ ನಿರ್ಮಾಣಕ್ಕೆ10 ಕೋಟಿ ರೂ. ಬಿಡುಗಡೆ ಮಾಡಲಾಗುವುದು : ಸಚಿವ ಅಶೋಕ್

Update: 2020-08-07 10:33 GMT

ಪಡುಬಿದ್ರಿ: ರಾಜ್ಯದ ಕರಾವಳಿಗೆ ಪ್ರಾಕೃತಿಕ ವಿಕೋಪ ಪುನರ್ವಸತಿ ಭವನ ನಿರ್ಮಣಕ್ಕೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಅವರು ಕಡಲ್ಕೊರೆತ ಉಂಟಾದ ಪಡುಬಿದ್ರಿ ಬೀಚ್‍ಗೆ ಭೇಟಿ ನೀಡಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಸುಸಜ್ಜಿತ ಭವನ ನಿರ್ಮಿಸಲಾಗುವುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದರು.

ನಿನ್ನೆ ಮಳೆಯಿಂದ ತಲೆಕಾವೇರಿಯಲ್ಲಿ ಬೆಟ್ಟು ಕುಸಿದು ಕಣ್ಮರೆಯಾಗಿದ್ದು, ಅವರಿಗೆ 3ತಿಂಗಳ ಹಿಂದೆಯೇ ಮುನ್ಸೂಚನೆ ನೀಡಲಾಗಿತ್ತು. ಅದರಲ್ಲಿ ಒಂದು ಮನೆಯವರು ಸ್ಥಳಾಂತರಗೊಂಡಿದ್ದರು ಎಂದು ಆರ್. ಅಶೋಕ್ ಹೇಳಿದರು. ರಾಷ್ಟ್ರೀಯ ವಿಪತ್ತು ನಿಧಿಗೆ ಕೇಂದ್ರ ಸರ್ಕಾರು ಪ್ರತಿ ವರ್ಷ 110 ಕೋಟಿ ನೀಡುತಿತ್ತು. ಆದರೆ ಈ ಭಾರಿ 300 ಕೋಟಿ ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದರು. 

ಉಡುಪಿ ಜಿಲ್ಲೆಗೆ ಪ್ರಾಕೃತಿಕ ವಿಕೋಪ ನಿಧಿಗೆ  5 ಕೋಟಿ ರೂ. ನೀಡಲಾಗುವುದು. ಈಗಾಗಲೇ ಜಿಲ್ಲಾಧಿಕಾರಿ ಪ್ರಾಕೃತಿಕ ವಿಕೋಪ ನಿಧಿಯಲ್ಲಿ 3.5 ಕೋಟಿ ರೂ. ಇದೆ ಎಂದರು. ಸಮುದ್ರ ಕೊರತೆಯಿಂದ ಪಡುಬಿದ್ರಿ ಬೀಚ್ ಸಂಪೂರ್ಣ ಹಾನಿಯಾಗಿದೆ. ಇದನ್ನು ತೆರವುಗೊಳಿಸಿ ಸಾಗರ್ ವಿದ್ಯಾಮಂದಿರ ಮುಂಭಾಗ 50 ಮೀಟರ್ ಶಾಶ್ವತ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ಆರಂಭಿಸಲಾಗುವುದು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕೊಯಿಲಾಡಿ, ಕರಾವಳಿ ಅಭುವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಡಿಸಿ ಜಗದೀಶ್, ಎಸ್‍ಪಿ. ವಿಷ್ಣುವರ್ಧನ್, ತಹಸೀಲ್ದಾರ್ ಮುಹಮ್ಮದ್ ಇಸ್ಹಾಕ್, ಕುಂದಾಪುರ ಎಸಿ ರಾಜು ಕೆ, ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಕುಮಾರ್, ಸಹಾಯಕ ಇಂಜಿನರ್ ಜಯರಾಜ್, ಡಿವೈಎಸ್‍ಪಿ ಜಯ್ ಶಂಕರ್, ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್, ಆರ್‍ಐ ರವಿ ಶಂಕರ್, ವಿಎ ಶ್ಯಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News