ಪುತ್ತೂರು: ಗಾಂಜಾ ಸಹಿತ ಆರೋಪಿ ಸೆರೆ

Update: 2020-08-07 12:36 GMT

ಪುತ್ತೂರು: ಸ್ಕೂಟರ್ ನಲ್ಲಿ ಗಾಂಜಾ ಮಾರಾಟ ನಡೆಸುಲು ಯತ್ನಿಸುತ್ತಿದ್ದ ಪ್ರಕರಣವನ್ನು ಗುರುವಾರ ರಾತ್ರಿ ಪತ್ತೆ ಹಚ್ಚಿದ ಪೊಲೀಸರು ಆರೋಪಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಕಬಕ ನಿವಾಸಿ ರಫೀಖ್ ಯಾನೆ ಗುಜುರಿ ಮುನ್ನಾ(39) ಬಂಧಿತ ಆರೋಪಿ.

ಕಬಕ ಗ್ರಾಮದ ವಿದ್ಯಾಪುರ ರೈಲ್ವೇ ಬ್ರಿಡ್ಜ್ ಬಳಿಯಲ್ಲಿ ಆಕ್ಟಿವಾ ಸ್ಕೂಟರ್‍ನಲ್ಲಿ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಠಾಣೆಯ ಎಸ್‍ಐ ಜಂಬುರಾಜ್ ಮಹಾರಾಜನ್ ಅವರ ನೇತೃತದ ತಂಡ ದಾಳಿ ನಡೆಸಿದ್ದರು. 

ಆರೋಪಿಯಿಂದ ರೂ. 21 ಸಾವಿರ ಮೌಲ್ಯದ 1.70 ಕಿಲೋ ಗಾಂಜಾ, ರೂ. 2000 ನಗದು, ರೂ. 1 ಸಾವಿರ ಮೌಲ್ಯದ ಮೊಬೈಲ್, ರೂ. 35 ಸಾವಿರ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದುಕೊಳ್ಳಲಾಗಿದೆ. 

ಕಾರ್ಯಾಚರಣೆಯಲ್ಲಿ ಕಾನ್ಸ್ ಟೇಬಲ್‍ಗಳಾಧ ಕಿರಣ್, ನಾಗೇಶ್, ನಾಗರಾಜ್ ಶ್ರೀಶೈಲ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News