ಬಕ್ರೀದ್ ಸುಸೂತ್ರ ಆಚರಣೆ : ಜಿಲ್ಲಾಡಳಿತಕ್ಕೆ ಮಸೂದ್ ಕೃತಜ್ಞತೆ
Update: 2020-08-07 16:05 GMT
ಮಂಗಳೂರು, ಆ.7: ಬಕ್ರೀದ್ ಆಚರಣೆ ಸಂಬಂಧಿಸಿ ನಿಕಟಪೂರ್ವ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡಲು ಆದೇಶಿಸಿದ್ದರು. ಆ ಬಳಿಕ ಹೊಸದಾಗಿ ಬಂದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಲು ಶಾಂತಿ ಸಭೆ ನಡೆಸಿದ್ದಾರೆ.
ಅದರ ಫಲವಾಗಿ ಬಕ್ರೀದ್ ಹಾಗೂ ಅದರ ನಂತರ ನಡೆದ ಮೂರು ದಿನದ ಕುರ್ಬಾನಿ ಆಚರಣೆಯು ಸುಸೂತ್ರವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಕೃತಜ್ಞೆ ಸಲ್ಲಿಸಿದ್ದಾರೆ.