ಜೋಡುಪಾಲದಲ್ಲಿ ರಸ್ತೆ ಬದಿ ಕುಸಿತ : ಸಂಚಾರ ಕಡಿತದ ಭೀತಿಯಲ್ಲಿ ಮೈಸೂರು – ಮಂಗಳೂರು ಹೆದ್ದಾರಿ

Update: 2020-08-07 16:13 GMT

ಸುಳ್ಯ : ಮೈಸೂರು-ಮಂಗಳೂರು ಹೆದ್ದಾರಿಯ ಜೋಡುಪಾಲ ಮತ್ತು ಮೊಣ್ಣಂಗೇರಿ ಪ್ರದೇಶಗಳು ರಸ್ತೆ ಬಿರುಕು ಬಿಡುತ್ತಿದ್ದು, ಹೆದ್ದಾರಿ ಸಂಚಾರ ಕಡಿತಗೊಳ್ಳುವ ಸಂಭವ ಹೆಚ್ಚಾಗಿದೆ.

ಮೈಸೂರು-ಮಂಗಳೂರು ಹೆದ್ದಾರಿಯ ಜೋಡುಪಾಲ ಎಂಬಲ್ಲಿ ಕಳೆದ ವರ್ಷದ ಮಳೆಗೆ ರಸ್ತೆಯು ಸಂಪೂರ್ಣ ಕೊಚ್ಚಿ ಹೋಗಿದ್ದು, ಇದರ ಕಾಮಗಾರಿಯು ಇತ್ತೀಚೆಗೆ ಪೂರ್ಣಗೊಂಡಿತ್ತು. ಈ ವರ್ಷದ ಮಳೆಗೆ ಕೊಡಗಲ್ಲಿ ಪುನಃ ಕುಸಿತ ಪ್ರಾರಂಭಗೊಂಡಿದ್ದು, ಜೋಡುಪಾಲದ ರಸ್ತೆ ಬದಿ ಕುಸಿತಗೊಂಡು ರಸ್ತೆಗೆ ಹಾಕಿದ ಮೋರಿ ತುಂಡಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಂಭವ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News