ಕಾಂಗ್ರೆಸ್ ಹಿರಿಯ ಮುಖಂಡ ದಿನೇಶ್ ಶೆಣೈ ಕಲ್ಲಡ್ಕ ನಿಧನ

Update: 2020-08-09 09:14 GMT

ಮಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಾಮಾಜಿಕ ಕಾರ್ಯಕರ್ತರಾಗಿದ್ದ ಮಾಜಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನೇಶ್ ಶೆಣೈ ಕಲ್ಲಡ್ಕರವರು ಇಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಾಜಿ ಸಚಿವರಾದ ರಮಾನಾಥ್ ರೈ,ಮಾಜಿ ಸಚಿವರೂ ಮಂಗಳೂರು ಶಾಸಕರಾದ ಯು ಟಿ ಖಾದರ್ ಸಹಿತ ಹಲವು ಮುಖಂಡರು ದಿನೇಶ್ ಶೆಣೈ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News