ಕುಮುಟಾದ ಮೀನುಗಾರ ನಾಪತ್ತೆ

Update: 2020-08-09 15:01 GMT

ಮಲ್ಪೆ, ಆ.9: ಮೀನುಗಾರಿಕೆ ಕೆಲಸಕ್ಕಾಗಿ ಕುಮುಟಾದಿಂದ ಮಲ್ಪೆಗೆ ಬಂದಿದ್ದ ಮೀನುಗಾರರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮುಟಾ ಹೀರೆಗುತ್ತಿ ಹರಿಜನಕೇರಿಯ ಹಾಲಪ್ಪ ಚಂದ್ರು ಹರಿಕಂತ್ರ(48) ಎಂಬವರು ಜು.30ರಂದು ಮಲ್ಪೆಬಂದರಿನಲ್ಲಿ ಭಟ್ಕಳದ ಚಂದ್ರ ಎಂಬವರ ಬೋಟಿನಲ್ಲಿ ಕೆಲಸ ಮಾಡಲು ಕುಮುಟಾದಿಂದ ಮಲ್ಪೆಗೆ ಬಂದಿದ್ದು, ಬಂದರಿನ ಡಿಸೆಲ್ ಬಂಕ್ ಬಳಿಯ ದಕ್ಕೆಯಲ್ಲಿ ನಿಂತಿದ್ದ ಹಾಲಪ್ಪ ಚಂದ್ರು ಹರಿಕಾಂತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News